ಭಾರತದಲ್ಲಿ ಘಟಿಸಿದ ಪ್ರಮುಖ ಐತಿಹಾಸಿಕ ಕದನಗಳು (The Major Historical Battles taking place in India)

 

1. ಮೊದಲನೆಯ ತರೈನ್ ಕದನ:
* ನಡೆದ ಇಸ್ವಿ : ಕ್ರಿ.ಶ. 1191
* ಫಲಿತಾಂಶ: ಪೃಥ್ವಿರಾಜ್ ಚೌಹಾನ್ ಮೊಹಮ್ಮದ್ ಘೋರಿ ನನ್ನು ಸೋಲಿಸಿದನು.

2. ಎರಡನೆಯ ತರೈನ್ ಕದನ :
* ನಡೆದ ಇಸ್ವಿ : ಕ್ರಿ.ಶ.1192
* ಫಲಿತಾಂಶ: ಮೊಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾನ್ ನನ್ನು ಸೋಲಿಸಿದನು.

3. ಮೊದಲನೆಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1526
* ಫಲಿತಾಂಶ: ಬಾಬರ್ ಇಬ್ರಾಹಿಂ ಲೋದಿನನ್ನು ಸೋಲಿಸಿದನು.

4. ಖನವಾ ಕದನ :
* ನಡೆದ ಇಸ್ವಿ : ಕ್ರಿ.ಶ.1527
* ಫಲಿತಾಂಶ: ಬಾಬರ್ ರಾಣಾ ಶುಂಗನನ್ನು ಸೋಲಿಸಿದನು. ಇದು ಭಾರತದಲ್ಲಿ ಬಾಬರ್ ಮತ್ತಷ್ಟು ತನ್ನ ಹೆಗ್ಗುರುತು ಬಲಪಡಿಸುವಲ್ಲಿ ಸಹಕಾರಿಯಾಯಿತು.

5. ಘಾಘ್ರ ಕದನ :
* ನಡೆದ ಇಸ್ವಿ : ಕ್ರಿ.ಶ.1529
* ಫಲಿತಾಂಶ: ಬಾಬರ್ ನು ಮಹಮೂದ್ ಲೋದಿ ಮತ್ತು ಸುಲ್ತಾನ್ ನುಸ್ರತ್ ಶಾರನ್ನು ಸೋಲಿಸಿದನು. ಈ ಯುದ್ಧ ಭಾರತದಲ್ಲಿ ಮುಘಲ್ ಆಡಳಿತದ ಸ್ಥಾಪನೆಗೆ ಕಾರಣೀಭೂತವಾಯಿತು.

6. ಎರಡನೆಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1556
* ಫಲಿತಾಂಶ: ಅಕ್ಬರ್ ಹೇಮುನನ್ನು ಸೋಲಿಸಿದನು.

7. ಮೂರನೇಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1761
* ಫಲಿತಾಂಶ: ಅಹ್ಮದ್ ಶಾ ಅಬ್ದಾಲಿ ಮರಾಠರನ್ನು ಸೋಲಿಸಿದನು.

8. ತಾಳಿಕೋಟೆ ಕದನ :
* ನಡೆದ ಇಸ್ವಿ : ಕ್ರಿ.ಶ.1565
* ಫಲಿತಾಂಶ: ಡೆಕ್ಕನ್ ಸುಲ್ತಾನರು ಖ್ಯಾತಿವೆತ್ತ ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿದರು.

9.ಹಲ್ದಿಘಾಟಿ ಕದನ :
* ನಡೆದ ಇಸ್ವಿ : ಕ್ರಿ.ಶ.1576
* ಫಲಿತಾಂಶ: ಮೊಘಲ್ ಸೇನೆಯ ನೇತೃತ್ವದಲ್ಲಿ ರಾಜ ಮಾನ್ ಸಿಂಗ್ ಮತ್ತು ಮೇವಾರದ ರಾಣ ಪ್ರತಾಪ್ ನಡುವೆ ನಿರ್ಣಾಯಕ ಯುದ್ಧ ನಡೆಯಿತು.

10.ಪ್ಲಾಸೀ ಕದನ :
* ನಡೆದ ಇಸ್ವಿ : ಕ್ರಿ.ಶ.1757
* ಫಲಿತಾಂಶ: ಬ್ರಿಟಿಷರು ಮೀರ್ ಜಾಫರ್ ನ ಸಹಾಯದಿಂದ ಸಿರಾಜ್ - ಉದ್-ದೌಲಾನನ್ನು ಸೋಲಿಸಿದರು. ಈ ಯುದ್ಧ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿತು.

11. ವಾಂಡಿವಾಷ್ ಕದನ :
* ನಡೆದ ಇಸ್ವಿ : ಕ್ರಿ.ಶ.1760
* ಫಲಿತಾಂಶ: ಬ್ರಿಟಿಷರು ಭಾರತದಲ್ಲಿ ನಿರ್ಣಾಯಕವಾಗಿ ಫ್ರೆಂಚರನ್ನು ಸೋಲಿಸಿದರು. ಯೂರೋಪಿನಲ್ಲಿನ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ನಡೆದ ಏಳು ವರ್ಷಗಳ ಯುದ್ಧ (1756 -1763) ಈ ಯುದ್ಧಕ್ಕೆ ಕಾರಣ. ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು ಮತ್ತು ಈ ಯುದ್ಧವು ಮೂರನೇಯ ನೇ ಕಾರ್ನಾಟಿಕ್ ಯುದ್ದದ ಭಾಗವಾಗಿತ್ತು.

12. ಬಕ್ಸಾರ್ ಕದನ :
* ನಡೆದ ಇಸ್ವಿ : ಕ್ರಿ.ಶ.1764
* ಫಲಿತಾಂಶ: ಬ್ರಿಟಿಷರು ಮೀರ್ ಖಾಸಿಮ್, ಶುಜಾ-ಉದ್-ದೌಲಾ (ಔದ್ಧಿನ ನವಾಬ್) ಮತ್ತು ಶಾ ಆಲಮ್ II (ಮೊಘಲ್ ಚಕ್ರವರ್ತಿ) ರು ಒಡಗೂಡಿದ ಸಂಯೋಜಿತ ಪಡೆಗಳನ್ನು ಸೋಲಿಸಿದರು.

13.ಸಮುಘರ್ ಕದನ :
* ನಡೆದ ಇಸ್ವಿ : ಕ್ರಿ.ಶ.1658
* ಫಲಿತಾಂಶ: ಔರಂಗಜೇಬನು ದಾರಾ ಶಿಕೊಹ್ ನನ್ನು ಸೋಲಿಸಿದನು.

14.ಕರ್ನಾಲ್ ಕದನ :
* ನಡೆದ ಇಸ್ವಿ : ಕ್ರಿ.ಶ.1739
* ಫಲಿತಾಂಶ: ನಾದಿರ್ ಷಾನು ಮುಘಲ್ ದೊರೆ ಮೊಹಮ್ಮದ್ ಶಾನನ್ನು ಸೋಲಿಸಿದರು.

Contributed By:Spardhaloka